6th poem bandidhe besige raja
lbs school
school notes, celebrations, video lessons
6th kannada notes
ಪದ್ಯ ಭಾಗ-6
ಪದ್ಯದ ಹೆಸರು : ಗಂಗವ್ವ ತಾಯಿ
ಅ . ಬಿಟಸ್ಥಳವನ್ನು ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿರಿ .
- ಬಾರವ್ವ ತಾಯಿ ಗಂಗವ್ವ ತಾಯಿ .
- ಹೊಳೆಯವ್ವ ತಾಯಿ ನೀರವ್ವ ತಾಯಿ .
- ಮೈಮನಸ ಹೊಲಸೆಲ್ಲ ತೊಳೆಯನ್ನ ತಾಯಿ ,
- ನೀರವ್ವ ಗಂಗವ್ವ ಮಳೆಯಾಗಿ ಬಾರವ್ವ
- ಒಣಗೀದ ನೆಲದಾಗ ಹಸುರಾಗಿ ಹೊಳೆಯವ್ವ ,
ಆ . ಸಮಾನಾರ್ಥಕ ಪದಗಳನ್ನು ಬರೆಯಿರಿ .
- ನೀರು : ಜಲ , ಗಂಗೆ
- ನಭ : ಆಕಾಶ , ಆಗಸ , ಬಾನು
- ಕುಣಿ : ಹೊಂಡ
- ತಾಯಿ : ಅಮ್ಮ ಅವ್ವ . ಮಾತೆ
ಇ . ಒಂದು ವಾಕ್ಯದಲ್ಲಿ ಉತ್ತರಿಸಿರಿ .
1. ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ ?
ಉತ್ತರ : ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ .
2. ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ ?
ಉತ್ತರ : ನೀರು ನೆಲದ ಒಳ ಹೊರಹೆಲ್ಲ , ಪಾಣದ ತುಂಬೆಲ್ಲಾ ನಗುನಗುತ , ನಲಿಯುತ , ಪುಟಿಯುತ್ತ , ಕುಣಿಯುತ್ತ , ಚಿಮ್ಮುತ್ತಾ , ಜಿಗುಯುತ್ತಾ , ಹರಿಯುತ್ತಾ , ಸುರುಯುತ್ತಾ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ .
3. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ ?
ಉತ್ತರ : ಒಣಗಿದ ನೆಲದಲ್ಲಿ ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ .
4. ಈ ಕವನವನ್ನು ಬರೆದವರು ಯಾರು ?
ಉತ್ತರ : ಈ ಕವನವನ್ನು ಬರೆದವರು ಡಾ || ಸಿದ್ದಲಿಂಗ ಪಟ್ಟಣಶೆಟ್ಟಿಯವರು .
ಈ . ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ?
1. ನೆಲದ ಕಣಕಣದಾಗ ಮನದ ಪದಪದರಾಗ ,
ಉತ್ತರ : ಮಳೆ ಬಾರದೆ ಇದ್ದಾಗ ರೈತರು ಗಂಗವ್ವನನ್ನು ಕವಿಯ ಮೂಲಕ ಕರೆದಿದ್ದಾರೆ .
2. ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ
ಉತರ : ಜನತೆ ಗಂಗವ್ವನನ್ನು ಮಳೆಯಾಗಿ ಸುರಿಯುವಂತೆ ಹೇಳಿರುವುದನ್ನು ಕವಿ ಕವಿತೆಯ ಮೂಲಕ ಕರೆದಿದ್ದಾರೆ.
3. ಒಣಗೀದ ನೆಲದಾಗ ಹಸಿರುಸಿರು ಉಳಿಸಾಕ
ಉತ್ತರ : ಗಂಗವ್ವ ಮಳೆಯಾಗಿ ಏಕೆ ಸುರಿಯಬೇಕೆನ್ನುವ ಪ್ರಶ್ನೆಗೆ ಉತ್ತರವಾಗಿ ಕಎ ಗಂಗವ್ವ ಒಣಗಿರುವ ನೆಲಕ್ಕೆ ಹಸಿರು ಬೆಳೆಯುವಂತೆ ಮಾಡಲು ಬರಬೇಕೆಂದು ರೈತರ ಪ್ರತಿನಿಧಿಯಾಗಿ ಕವಿ ಗಂಗವ್ವನನ್ನು ಕರೆಯುತ್ತಿದ್ದಾರೆ .
4. ಜೀವದಾ ತುಣಕಾಗಿ ಮೈಮನಸ ಹೊಲಸೆಲ್ಲ .
ಉತ್ತರ : ಜೀವನದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಮೈ ಮನಸ್ಸಿನ ಕೊಳೆಯೆಲ್ಲ ತೆಗೆಯಲು ಗಂಗವ್ವ ಧರೆಗೆ ಇಳಿದು ಬಾ ಎಂದು ಕಏ ಗಂಗವ್ವನಿಗೆ ಕರೆದಿದ್ದಾರೆ .
ಈ . ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ .
1. ಗಂಗವ್ವ ಇದ್ದರೆ ಎಲ್ಲೆಲ್ಲಿ , ಏನೇನು ಆಗುವುದೆಂದು ಕವಿ ಹೇಳಿದ್ದಾರೆ ?
ಉತ್ತರ : ಗಂಗವ್ವ ಇದ್ದರೆ ಒಣಗಿದ ನೆಲದಲ್ಲಿ ಹಸಿರು ಅಲಂಕರಿಸುವುದು , ಹಸಿರು ಹಸಿರಾಗಿ ಬೆಳೆದು ಎಲ್ಲರ ಉಸಿರು ಉಳಿಸುವುದು , ಗಂಗವ್ವ ಬಂದರೆ ಜನರ ಮೈ ಮನಸ್ಸಿನ ಕೊಳೆಯೆಲ್ಲಾ ತೊಳೆಯಲ್ಪಟ್ಟು ಅವರು ಪರಿಶುದ್ಧರಾಗುವರು . ನದಿಯಾಗಿ ಹರಿದಾಗ ಹನಿ ಹನಿ ಕಣ ಕಣವೆಲ್ಲಾ ಜಗಿಸಿ ಎಲ್ಲೆಲ್ಲೂ ಸಂತೋಷ , ನಗು ನಲಿವು ಕಂಡುಬರುತ್ತದೆ .
2. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ ?
ಉತ್ತರ : ನೀರು ಜನರ ಉಪಯೋಗಕ್ಕೆ ಪ್ರಾಣವಾಯುವಿನಷ್ಟೆ ಅಗತ್ಯವಾಗಿ ಮನುಷ್ಯನಿಗೆ ಕುಡಿಯಲು ಬೇಕು , ಮಳೆಯಾಗಿ ಸುರಿದರೆ ಮಾತ್ರ ನೆಲ ಹಸಿರಾಗುತ್ತದೆ . ಹಸಿರು ನೆಡಲು ಸಾಧ್ಯವಾಗುತ್ತದೆ . ಹಸಿರು ಎಲ್ಲರಿಗೂ ಬೇಕಾದ ಆಹಾರ ಕೊಟ್ಟು ಜೀವಿಗಳ ಉಸಿರನ್ನು ಉಳಿಸುತ್ತದೆ ನೀರು ಇಲ್ಲದೆ ಜನರ ಮೈಗಳು ಕೊಳಕಾಗಿದ್ದರೆ , ಅದನ್ನು ಸ್ವಚ್ಛಗೊಳಿಸಲು ನೀರು ಅಗತ್ಯವಾಗಿ ಬೇಕು , ನೀರು ಇಲ್ಲದೆ ಬರಗಾಲ ಬಂದಲ್ಲಿ ಜನರು ಮನಸ್ಸು ತೊಡಗಿಸುತ್ತಾರೆ . ಅದರ ಬದಲು ಎಲ್ಲರಿಗೂ ತೃಪ್ತಿಯಾಗಿ ಊಟ – ಬಟ್ಟೆ ಸಿಕ್ಕಲ್ಲಿ ಅವರ ಮನಸ್ಸು ಇಂಥಹ ಕೆಲಸಗಳಿಗೆ ಎಡೆ ಮಾಡುವುದಿಲ್ಲ , ಹೀಗೆ ಜನಕ್ಕೆ ಎಲ್ಲರಿಗೂ ಕವಿ ಹೇಳಿದಾಗ ನೀರು ಬೇಕು ಎಂದು .
ಊ . ಕೊಟ್ಟಿರುವ ಪದ್ಯದಲ್ಲಿ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ ,
ಬೆಳ್ಳಾನ ಎರಡೆತ್ತು ಬೆಳ್ಳಿಯ ಬಾರುಕೋಲು
ಹಳ್ಳಾದ ಮಾಗಿ ಹೊಡೆದಾವು | ಎತ್ತಿನ
ತೆಜ್ಞಾನ ಹೊಟ್ಟಿ ಹಸಿದಾವು .
ಮೊದಲು . ಎರಡನೇ ಹಾಗೂ ಮೂರನೇ ಸಾಲಿನ ಎರಡನೇ ಅಕ್ಷರ ‘ ಳ್ಳಾ ‘ ಪುನರಾವರ್ತನೆ ಆಗಿರುವುದರಿಂದ ಇದು ‘ ಆದಿ ಪ್ರಾಸ ‘ ಇದೆ .
ಭಾರತೀಯತೆ
ಪದ್ಯದ ಹೆಸರು : ಭಾರತೀಯತೆ
ಕೃತಿಕಾರರ ಹೆಸರು : ಕೆ.ಎಸ್ . ನರಸಿಂಹಸ್ವಾಮಿ
ಕೃತಿಕಾರರ ಪರಿಚಯ
ಆಧುನಿಕ ಕಾವ್ಯ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ.ಎಸ್ . ನರಸಿಂಹಸ್ವಾಮಿ ಅವರು ೨೬-೦೧-೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು . ಇವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ ೧೯೪೩ ರಲ್ಲಿ ಪ್ರಕಟವಾಯಿತು . ಇವರು ಶಿಲಾಲತೆ , ಐರಾವತ , ನವಪಲ್ಲವ , ಇರುವಂತಿಗೆ , ದೀಪದ ಮಲ್ಲಿ , ಮನೆಯಿಂದ ಮನೆಗೆ , ತೆರೆದ ಬಾರಾದ ಕವನ ಸಂಕಲನಗಳನ್ನು ರಚಿಸಿದ್ದಾರೆ . ೧೯೭೭ ರಲ್ಲಿ ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ . ೧೯೯೦ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರ ದುಂಡು ಮಲ್ಲಿಗೆ ಕವನ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಲಭಿಸಿದೆ . ಇವರನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ ಎಂದೇ ಗುರುತಿಸಿದೆ . ೨೦೦೪ ರಲ್ಲಿ ದೈವಾಧೀನರಾದರು . ಪ್ರಸ್ತುತ ಭಾರತೀಯತೆ ಕವನವನ್ನು ಕೆ . ಎಸ್ . ನರಸಿಂಹಸ್ವಾಮಿ ಅವರ ನವಪಲ್ಲವ ಕವನ ಸಂಕಲನ ( ಪುಟ ೪೬೪ ) ದಿಂದ ಆರಿಸಿಕೊಂಡಿದೆ .
Kseeb Solutions For Class 8 Kannada Poem 2 Bharatiyate Notes
ಆಶಯ ಭಾವ
ಭಾರತೀಯತೆ ಕವನದಲ್ಲಿ ಕವಿ ಭಾರತೀಯರ ಏಕತೆಯನ್ನು ಕುರಿತು ಅಭಿಮಾನದಿಂದ ಹೇಳಿದ್ದಾರೆ . ಭಾರತ ದೇಶದ ಪ್ರಾಕೃತಿಕ ಸೌಂದರ್ಯ , ಜನರ ಜೀವನ ಶೈಲಿ , ಸಾಂಸ್ಕೃತಿಕ ಪರಂಪರೆ , ಭಿನ್ನತೆಯಲ್ಲಿ ಏಕತಾಭಾವ , ದೇಶಭಕ್ತಿ , ತ್ಯಾಗ , ಪರೋಪಕಾರಬುದ್ಧಿ ಮುಂತಾದ ಉತ್ಕೃಷ್ಟ ಗುಣಗಳನ್ನು ಕವಿ ಇಲ್ಲಿ ವಿಶಾದಿಕರಿಸಿದ್ದಾರೆ.
8ನೇ ತರಗತಿ ಭಾರತೀಯತೆ ಕನ್ನಡ ನೋಟ್ಸ್
ಪದಗಳ ಅರ್ಥ:
- ಹಿಮ-ಮಂಜು
- ಕರಾವಳಿ-ಸಮುದ್ರತೀರ
- ಪೆರ್ದೆರೆ-ದೊಡ್ಡ ಅಲೆ
- ಘೋಷ-ಗಟ್ಟಿಯಾಗಿ
- ಗಡಿ-ಸೀಮೆ
- ಯೋಧ-ಸೈನಿಕ
- ಕೊರಳು-ಧ್ವನಿ
- ತನು-ದೇಹ
- ತೆರು-ನೀಡು
- ಹುತಾತ್ಮ-ದೇಶಕ್ಕಾಗಿ ಪ್ರಾಣ ತೆತ್ತವ
- ಸ್ಮರಣೆ-ನೆನಪು
- ನೆರೆ-ಪಕ್ಕ
- ನೆರಳು-ಆಶ್ರ,ಮ
- ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
- 1. ಪರ್ವತ ಹಿಮ ಯಾವ ಎತ್ತರಕ್ಕೆ ಎದ್ದು ನಿಂತಿದೆ?
ಹೊಳೆಬಾಗಿಲು
ಕೃತಿಕಾರರ ಪರಿಚಯ
ಕವಿ , ಪ್ರಬಂಧಕಾರ ಸುಶ್ರುತ ದೊಡ್ಡೇರಿ , ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು , ಈಗ ಬೆಂಗಳೂರು ವಾಸಿ ‘ ಪ್ರಣತಿ ‘ ಸಂಸ್ಥೆಯ ಜತೆ ಸಾಹಿತ್ಯ – ಸಂಸ್ಕೃತಿ – ಪ್ರಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು . ‘ ಚಿತ್ರಚಾಪ ‘ ( ಗೆಳೆಯರ ಜತೆ ) , ‘ ಹೊಳೆಬಾಗಿಲು ‘ ( ಲಲಿತ ಪ್ರಬಂಧಗಳು ) , ‘ ಬ್ಲಾಗಿಸು ಕನ್ನಡ ಡಿಂಡಿಮವ ‘ ( ಸಹ – ಸಂಪಾದಿತ ) ಇವರ ಪ್ರಕಟಿತ ಕೃತಿಗಳು . ‘ ಮೌನಗಾಳ ‘ ಎಂಬ ಬ್ಲಾಗಿನಲ್ಲಿ ಹಲವು ವರ್ಷಗಳಿಂದ ಬರೆಯುತ್ತಿದ್ದಾರೆ .
9ನೇ ತರಗತಿ ಹೊಳೆಬಾಗಿಲು ಪಠ್ಯ ಪೂರಕ ಅಧ್ಯಯನ ನೋಟ್ಸ್
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲ ಚಟುವಟಿಕೆಯನ್ನು ಮಾಡಬಹುದು?
ಲಾಂಚು ಬರುವವರೆಗೆ ಹೊತ್ತು ಕಳೆಯಲು ದಂಡೆಗುಂಟ ಅಡ್ಡಾಡ್ಡುತ್ತಾ ಕಪ್ಪೆ ಚಿಪ್ಪು ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿಬರುವುದನ್ನು ನೋಡುತ್ತಾ ಮೈಮರೆಯಬಹುದು.
2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ?
ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳು ಹಿಡಿಸುವುದಿಲ್ಲ. ಒಂದು ಕಾರಿಗೆ ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು. ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲಿ ಬಂದಿದ್ದರೂ ಓಡಿ ಬಂದು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.
3. ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ಏನೇನು ಮಾತುಕತೆಗಳು ನಡೆದಿರುತ್ತವೆ?
ಅಜ್ಜಿ ಒಂದು ಕೈ ಮುಗಿದು ” ದೇವರೇ ಸುಖವಾಗಿ ಆ ದಡ ತಲುಪಿಸಪ್ಪಾ” ಎನ್ನುತ್ತಿದೆ. ಹುಡುಗನೊಬ್ಬ ಅಪ್ಪನಿಗೆ ” ಅಪ್ಪ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ ” ಎಂದು ಕೇಳುತ್ತಿದ್ದಾನೆ. ಅಪ್ಪನಿಗೆ ಏನು ತಿಳಿಯದಿದ್ದರೂ ” ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ ಅಲ್ಲಿಂದ ಬಂದದ್ದು ” ಇದು ಎಂದು ಏನೋ ಸಮಜಾಯಿಷಿ ಕೊಟ್ಟಿದ್ದಾನೆ.
4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರಡುತ್ತಾರೆ ?
ಲಾಂಚು ನಿಂತಿದ್ದೆ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ ಬಸ್ಸು ಕಾರು ಬೈಕುಗಳು ಬುರಬುನೆ ದಡ ಸೇರಿವೆ. ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ? ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ . ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಿಲ್ಲಿಗೆ ಚದುರಿ ಹೋಗಿದ್ದವರೆನ್ನಲ್ಲ ಕರೆ ಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ. ನಾಗಾಲೋಟದಲ್ಲಿ ಎಂದು ಲಾಂಚಿನ ಪಯಣ ಮುಗಿಸಿದ ಜನರ ಸಂಭ್ರಮವನ್ನು ಲೇಖಕರು ವರ್ಣಿಸಿದ್ದಾರೆ.
5. ಹೊಳೆ ಮತ್ತು ಲಾಂಚಿನ ಒಟ್ಟಾರೆ ದಿನಚರಿಯ ಬಗ್ಗೆ ಲೇಖಕರ ಅನಿಸಿಕೆಯೇನು?
ಹೊಳೆ ದಾಟಲು ಲಾಂಚ್ ಅನಿವಾರ್ಯ ನೀವು ಎಷ್ಟೆ ವೇಗವಾಗಿ ಬಂದರೂ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ ಅವಸರ ಮಾಡುವಂತಿಲ್ಲ. ದಿನವೂ ಅದೇ ಲಾಂಚ್ ಅದು ಅಲ್ಲಿಂದ ಜನ ವಾಹನಗಳನ್ನೆಲ್ಲ ಹತ್ತಿಸಿಕೊಂಡು ನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಲಾಂಚಿನಲ್ಲಿ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ. ಇದೇ ಲಾಂಚನ್ನು ಇದೇ ರೂಟಿನಲ್ಲಿ ಪ್ರತಿದಿನವು ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಎನ್ನುವ ಮಾತಿನಲ್ಲಿ ಒಂದೇ ತರಹದ ದಿನಚರಿಯಿಂದ ಆಗುವ ಬೇಸರವನ್ನು ಲೇಖಕರು ಹೊರಹಾಕುತ್ತಾರೆ.
ಬೆಡಗಿನ ತಾಣ ಜಯಪುರ
ಕೃತಿಕಾರರ ಪರಿಚಯ :
ಶಿವರಾಮ ಕಾರಂತ
ಶಿವರಾಮ ಕಾರಂತರು ( ಕ್ರಿಸ್ತ ಶಕ ೧೯೦೨ ) ಉಡುಪಿ ಜಿಲ್ಲೆಯ ಕೋಟದವರು , ಇವರ ಪ್ರಮುಖ ಕೃತಿಗಳು : ಕಾದಂಬರಿಗಳು : ಚೋಮನದುಡಿ , ಮರಳಿಮಣ್ಣಿಗೆ , ಬೆಟ್ಟದಜೀವ , ಅಳಿದಮೇಲೆ ಮುಂತಾದವು . ಕಥಾಸಂಕಲನಗಳು : ಹಸಿವು , ಹಾವು , ಕವಿ , ಕರ್ಮ , ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ ಮತ್ತು ಸೀಲ್ಕವನಗಳು , ಪ್ರವಾಸ ಕಥನಗಳು : ಅಬುವಿನಿಂದ ಬರಾಮಕ್ಕೆ , ಅಪೂರ್ವ ಪಶ್ಚಿಮ , ಅರಸಿಕರಲ್ಲ , ಪಾತಾಳಕ್ಕೆ ಪಯಣ , ಈ ಕೃತಿಗಳಲ್ಲದೆ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಕಥನ , ಯಕ್ಷಗಾನ ಬಯಲಾಟ – ಜಾನಪದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಲಕಭಿಸಿರುವ ಪ್ರಶಸ್ತಿ ಪುರಸ್ಕಾರಗಳು : . ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ , * ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ . * ಇವರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ೩೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . [ ಪ್ರಸ್ತುತ ಗದ್ಯವನ್ನು ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಿಕೊಳ್ಳಲಾಗಿದೆ . ]
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,
1. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?
ಉತ್ತರ : ಜಯಪುರದ ಜನರಿಗೆ ಕೆಂಪು , ಕಿತ್ತಳೆ , ಹಳದಿ ಬಣ್ಣಗಳು ಇಷ್ಟ .
2. ಜಯಪುರದ ಪೂರ್ವದ ರಾಜಧಾನಿ ಯಾವುದು ?
ಉತ್ತರ : ಜಯಪುರದ ಪೂರ್ವದ ರಾಜಧಾನಿ ಅಂಬೇರ ವಿಗೆ
3. ಲೇಖಕರಿಗಿದ್ದ ಹಂಬಲವೇನು ?
ಉತ್ತರ : ಜಯಪುರದಲ್ಲಿ ಜಾನಪದ ನೃತ್ಯಗಳನ್ನು ನೋಡಬೇಕೆಂಬುದು ಲೇಖಕರ ಹಂಬಲವಾಗಿತ್ತು ,
4. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?
ಉತ್ತರ : ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ರೈಗಳ ಮನೆಯಿತ್ತು .
5. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ ?
ಉತ್ತರ : ಜಯಪುರದಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1 , ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ ,
ಉತ್ತರ : ಅಂಬೇರ ಕೋಟೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲಿ ಮೀರಾಬಾಯಿಯ ದೇವಾಲಯವಿದೆ . ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವದು . ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ಅಲ್ಲಿ ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ , ನವರಂಗಗಳಿವೆ .
2. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,
ಉತ್ತರ : ಅದು ಊರಿನ ಜನಸಾಮಾನ್ಯರ ನೃತ್ಯವಾಗಿತ್ತು . ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು . ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು , ಮುಖತೋರಿಸದೆ ಕುಣಿಯತೊಡಗಿದರು . ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ನರ್ತಿಸತೊಡಗಿದರು . ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾ ಚೆಲುವುಗಳೆರಡೂ ಇದ್ದವು .
3. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ ,
ಉತ್ತರ : ಜಯಪುರ ನಗರದ ಬೀದಿಗಳು ಬಹಳ ಅಗಲವಾಗಿಯೂ ನೇರವಾಗಿಯೂ ಇವೆ . ಬಹುದೂರದಿಂದ ಕಾಣಿಸುವ ಅಂಗಡಿ ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ . ಅಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಅಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ ಭವ್ಯವಾದ ಮಹಾದ್ವಾರಗಳಿವೆ .
4. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?
ಉತ್ತರ : ಲೇಖಕರು ಹಿಂದೆ ಅಂಬೇರಕ್ಕೆ ಹೋಗಿದ್ದಾಗ ಅಲ್ಲಿ ಜನವಸತಿ ಇದ್ದಿರಲಿಲ್ಲ . ಆಗ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಆದರೆ ಈಗ ಹಾಗಿಲ್ಲ : ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ .
ಉತ್ತರ : ಅರಮನೆಯ ಮೊದಲ ಅಂತಸ್ತಿನಲ್ಲಿ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದ ಪುಟ್ಟ ದೇವಾಲಯವಿದೆ . ಅದರ ಗೋಡೆ , ನೆಲ , ಸ್ತಂಭಗಳೂ ಹಾಲುಗಲ್ಲಿನವು . ಮೇಲಿನ ಅಂಗಳವನ್ನೇರಿ ಹೋದರೆ ಅಲ್ಲಿ ದೊಡ್ಡದಾದ , ವಿಶಾಲವಾದ ಹಾಲುಗಲ್ಲಿನ ಸಭಾಂಗಣ ಕಂಡುಬರುತ್ತದೆ . ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು ಸುಂದರವಾಗಿ ಕಾಣುತ್ತದೆ . ಎದುರಿನ ಅಂಗಣವೂ ಸಾಕಷ್ಟು ವಿಶಾಲವಾಗಿದೆ . ಅಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವಿದ್ದು ಅಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ರಾವಳಿಗಳೂ ಇವೆ . ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಲ್ಪಟ್ಟಿವೆ . ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ ಆ ಲಕೋಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ .
2. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ .
ಉತ್ತರ : ಜಯಪುರ ಬಣ್ಣಗಾರರ ತವರೂರು , ಬಣ್ಣ ಹಾಕುವ ಕುಶಲಿಗರು ಆ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ . ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಹಾಗೆಂದೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ . ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು . ಸುತ್ತುಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ .
3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ .
ಉತ್ತರ : ‘ ಜಂತ್ರ ಮಂತ್ರ ‘ ಹಳೆಯ ಕಾಲದ ಖಗೋಳವಿಜ್ಞಾನದ ಪರಿಶೀಲನಾಲಯ , ೪೦೦-೫೦೦ ವರ್ಷಗಳ ಪೂರ್ವದಲ್ಲಿ ಖಗೋಳಶಾಸ್ತ್ರಜ್ಞರು , ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು ಪರಿಶೀಲಿಸಿ ನೋಡುವ ಸಲುವಾಗಿ , ಅಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ . ಅಂತಹ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯುವುದಕ್ಕೆ ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ . ದೂರದರ್ಶಕ ಯಂತ್ರದ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೆ ಜಯಪುರದ ಸಮೀಪದ ಅಂಬೇರಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಜನವಸತಿ ಇರಲಿಲ್ಲ . ಅಂದಿಗೂ ಇಂದಿಗೂ ಅಲ್ಲಿ ಉಂಟಾಗಿರುವ ಬದಲಾವಣೆಯನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಹಿಂದೆ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು , ಆದರೆ ಈಗ ಹಾಗಿಲ್ಲ : ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
ಸ್ವಾರಸ್ಯ : ಅಂದು ಜನವಸತಿ ಇಲ್ಲದೆ ಪ್ರಾಚೀನ ಗುಡಿಗೋಪುರಗಳು ಪಾಳುಬಿದ್ದಿದ್ದವು . ಆದರೆ ಆಧುನಿಕತೆಯ ಪ್ರಭಾವದಿಂದ ಈಗ ಅಲ್ಲಿ ಜನಸಂದಣಿ ಇದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
2. “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಅಂಬೇರ ಕೋಟೆಯಲ್ಲಿರುವ ಅರಮನೆಯ ಮೂರನೆಯ ಅಂತಸ್ತಿನಲ್ಲಿ ಕೆಲವು ಚಾವಡಿಗಳಲ್ಲಿ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕೆಗಳುಳ್ಳ ರಚನೆಯನ್ನು ಕುರಿತು ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಅಂತಹ ರಚನೆಗಳಿರುವೆಡೆ ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕ್ಷ್ಮೀಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ . ಎಂದು ವರ್ಣಿಸಿದ್ದಾರೆ .
ಸ್ವಾರಸ್ಯ : ಜಯಪುರವನ್ನು ಆಳಿದ ರಜಪೂತ ದೊರೆಗಳ ಕಲಾ ರಸಿಕತೆ ಹಾಗು ಅವರು ಕಲೆಗೆ ನೀಡಿದ ನೀಡಿದ ಪ್ರೋತ್ಸಾಹ ಲೇಖಕರ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
3. “ ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಆಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ‘ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕಾರಂತರು ಜಯಪುರದಲ್ಲಿದ್ದ ತಮ್ಮ ಸ್ನೇಹಿತರಾದ ರೈಯವರ ಮನೆಗೆ ಹೋದಾಗ ಅಲ್ಲಿ ತಾವು ಬಿಸಿನೀರಿನ ಸ್ನಾನ ಮಾಡಿದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . “ ರೈಯವರ ಮನೆ ಸುತ್ತಲೂ ಮರಳು ಹರಡಿದ್ದ ಮರುಭೂಮಿಯಲ್ಲಿತ್ತು . ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ಏಕೆಂದರೆ ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು ” ಎಂದು ಹೇಳಿದ್ದಾರೆ .
ಸ್ವಾರಸ್ಯ : ಮರುಭೂಮಿಯಲ್ಲಿ ವಾಸಿಸುವವರ ಜೀವನ ಶೈಲಿಯ ಮೇಲೆ ಅಲ್ಲಿನ ವಾಯುಗುಣ ಬೀರುವ ಪ್ರಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ಗಂಡಸರೂ ರಂಗುರಾಯರೇ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎ೦ಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಜಯಪುರದ ಜನರಿಗಿರುವ ಬಣ್ಣಗಳ ವ್ಯಾಮೋಹವನ್ನು ವರ್ಣಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . ಜಯಪುರದ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು : ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ , ಗಂಡಸರೂ ರಂಗುರಾಯರೇ , ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುತ್ತಾರೆ . ಎಂದು ಲೇಖಕರು ವರ್ಣಿಸಿದ್ದಾರೆ .
ಸ್ವಾರಸ್ಯ : ಜಯಪುರದಲ್ಲಿ ಬಣ್ಣದ ವ್ಯಾಮೋಹ ಹೊಂದಿರುವುದರಲ್ಲಿ ಹೆಂಗಸರಷ್ಟೇ ಅಲ್ಲ ಗಂಡಸರೂ ಮುಂದಿದ್ದಾರೆ ಎಂಬುದು ಲೇಖಕರ ಮಾತಿನ ಸ್ವಾರಸ್ಯವಾಗಿದೆ .
ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಲ ,
I ಜಯಪುರ ಬಣ್ಣಗಾರರ ತವರೂರು
2 , ಚಿತ್ರಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳು ,
3 , ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ .
4. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು .
5. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು
ಸರಿ ಉತ್ತರಗಳು
1 , ತವರೂರು ,
2 , ಹಾಲುಗಲ್ಲಿನ
3 , ಚಂದ್ರಕಾಂತ ಶಿಲೆಯ
4 ,ಡೋಲು
5 , ಸತ್ಕಾರಕ್ಕೆ
ಊ) ಹೊಂದಿಸಿ ಬರೆಯಿರಿ
ಅ ಪಟ್ಟಿ ಆ ಪಟ್ಟಿ ಸರಿ ಉತ್ತರಗಳು
1 , ಅಂಬೇರ ಸುವರ್ಣ ದೀರ್ಘಸಂದಿ ಪೂರ್ವದ ರಾಜಧಾನಿ
2 , ಲಕ್ಷೇಪಲಕ್ಷ ತತ್ಸಮ ಗುಣಸಂಧಿ
3. ಬಣ್ಣಬಣ್ಣ ಪೂರ್ವದ ರಾಜಧಾನಿ ಖಗೋಳ ವೀಕ್ಷಣಾಲಯ
4 ಜಂತ್ರ ಮಂತ್ರ ದ್ವಿರುಕ್ತಿ ತತ್ಸಮ
ಮಂತ್ರವಾದಿ