Showing posts with label ninth Kannada notes. Show all posts
Showing posts with label ninth Kannada notes. Show all posts

9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes

 9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Pdf Download, 9th ಕನ್ನಡ ನಾಡು ನುಡಿ Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಕನ್ನಡ ನಾಡು ನುಡಿ

ಕವಿ ಪರಿಚಯ :

ಶ್ರೀವಿಜಯ :

ಈತನ ಕಾಲ : ಕ್ರಿ.ಶ. ಸುಮಾರು ೯ ನೆಯ ಶತಮಾನ ಆಶ್ರಯದಾತ : ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂ ಈತನ ಕೃತಿ ‘ ಕವಿರಾಜಮಾರ್ಗ ‘ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ . ನಯಸೇನ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ ಸ್ಥಳ : ಧಾರವಾಡ ಜಿಲ್ಲೆಯ ಮುಳುಗುಂದ , ಈತನ ಪ್ರಮುಖ ಕೃತಿ : ‘ ಧರ್ಮಾಮೃತ ‘ ಎ ೦ ಬ ಚಂಪೂ ಕಾವ್ಯ * ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ . ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಆಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ . ನೇಮಿಚಂದ್ರ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ .

* ಈತನ ಕೃತಿಗಳು : ‘ ಲೀಲಾವತೀ ಪ್ರಬಂಧ ‘ ಹಾಗೂ ‘ ಅರ್ಧನೇಮಿ ಪುರಾಣ ‘ * ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ . ಮಹಲಿಂಗರಂಗ : ಈತನ ಕಾಲ : ಕ್ರಿ.ಶ. ಸುಮಾರು ೧೭ ನೆಯ ಶತಮಾನ.

* ಇವನ ನಿಜನಾಮ : ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

* ಈತನ ಆರಾಧ್ಯ ದೈವ : ಶ್ರೀಶೈಲ ಮಲ್ಲಿಕಾರ್ಜುನ .

* ಈತನ ಪ್ರಮುಖ ಕೃತಿ : ‘ ಅನುಭವಾಮೃತ ‘ ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ ಆಂಡಯ್ಯ : ಈತನ ಕಾಲ : ಕ್ರಿ.ಶ. ಸುಮಾರು ೧೩ ನೇ ಶತಮಾನ . * ಆಶ್ರಯದಾತ : ಕದಂಬರ ದೊರೆ ಕಾಮದೇವ , * ಇವನ ಪ್ರಮುಖ ಕೃತಿ : ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯ

* ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ . ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ . ‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ . ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

9th Standard Kannada Nadu Nudi Poem Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ .

2. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ನಾಡವರ್ಗಳು ( ಸಾಮಾನ್ಯ ಜನರು ) ಎಂದು ಕವಿ ಹೇಳಿದ್ದಾನೆ .

3.ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ಎಣ್ಣೆಯನ್ನು ಬೆರೆಸಬಾರದು .

ಆ ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

1. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ , ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ . ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ . ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು : ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು ; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು : ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ .

2. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : ಮಹಲಿಂಗರಂಗನು ಕನ್ನಡ ಭಾಷೆಯ ಬಗ್ಗೆ ವರ್ಣಿಸುತ್ತಾ “ ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ , ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು , ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಪತ್ನಿಸುತ್ತಾನೆ . ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ ? ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ .

3. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು . ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು . ಈ ಸಾಮಾನ್ಯ ಜನರು ನಿಜವಾಗಿಯು ಚತುರರು , ಅವರು ಶಿಕ್ಷಣವನ್ನು ಪಡೆಯದಿದ್ದರು . ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ .

4. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು ; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ .

5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ? ಅಥವಾ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ , ಕೆಂಪಾದ ತೆಂಗು ಅಲ್ಲದೆ , ನಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸುತ್ತಾನೆ . ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ .

ಇ ] ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಸಾಮಾನ್ಯ ಜನರು ನಿಜವಾಗಿಯು ಚತುರರು . ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ವರ್ಣಿಸಿದ್ದಾನೆ . ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು . ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು . ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು . ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ . ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು : ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು : ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಎಂದು ಹೇಳುತ್ತಾ ಅಚ್ಚಗನ್ನಡದ ಪರ ದನಿ ಎತ್ತಿದ್ದಾನೆ . ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ , ಮಧುರತೆ , ಶಕ್ತಿಯ ಬಗ್ಗೆ ವರ್ಣಿಸುತ್ತಾ ” ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿದ್ದು , ಅದರಲ್ಲೇ ಮೋಕ್ಷವನ್ನು ಗಳಿಸಬಹುದು ; ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಕನ್ನಡ ಭಾಷೆಯ ಸತ್ವವನ್ನು ಅಭಿಮಾನದಿಂದ ಹೇಳಿಕೊಂಡಿದ್ದಾನೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನೇಮಿಚಂದ್ರನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿಗಳ ಕವಿತಾ ಸಾಮರ್ಥ್ಯವನ್ನು ವರ್ಣಿಸುವ ಸಂದರ್ಭದಲ್ಲಿ ನೇಮಿಚಂದನು ಈ ಮಾತನ್ನು ಹೇಳಿದ್ದಾನೆ . ಪ್ರಸಿದ್ಧ ಕಾವ್ಯಗಳಲ್ಲಿ ಬರುವ ಘಟನೆಗಳು ನಡೆದವೋ ಇಲ್ಲವೋ ಆದರೆ ಅವನ್ನು ಕವಿಗಳು ತಮ್ಮ ಕಾವ್ಯಗಳ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಕವಿ ಅಭಿಪ್ರಾಯ ಪಟ್ಟಿದ್ದಾನೆ .

ಸ್ವಾರಸ್ಯ : ‘ ರವಿ ಕಾಣದ್ದನ್ನು ಕವಿ ಕಂಡ ‘ ಎಂಬ ಲೋಕೋಕ್ತಿಯನ್ನು ನೇಮಿಚಂದ್ರನು ಇಲ್ಲಿ ಸ್ವಾರಸ್ಯಕರವಾಗಿ ಸಮರ್ಥಿಸಿದ್ದಾನೆ .

2. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಮಹಲಿಂಗರಂಗನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕನ್ನಡ ಭಾಷೆಯ ಸರಳತೆ ಮತ್ತು ಅದರ ಶಕ್ತಿಯನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ತಣ್ಣಗಿನ ಹಾಲಿನಂತೆ , ಸಿಗುರಿಲ್ಲದ ಕಬ್ಬಿನಂತೆ , ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಸುಲಭ ಮತ್ತು ರುಚಿಕರವೆಂದಿದ್ದಾನೆ . ಸ್ವಾರಸ್ಯ : ಕನ್ನಡ ಭಾಷೆಯ ಸರಳ ಸುಂದರತೆಯನ್ನೂ ಮುಕ್ತಿಗಾಗಿ ಕನ್ನಡವೇ ಲೇಸೆಂಬುದನ್ನೂ ಕವಿ ಸ್ವಾರಸ್ಯಕರವಾಗಿ ಹೇಳಿದ್ದಾನೆ .

ಸ್ವಾರಸ್ಯ : ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಸಿಕ್ಕಿ ನಾಶವಾಗುತ್ತಿದ್ದ ಅಚ್ಚ ಕನ್ನಡ ಭಾಷೆಯನ್ನು ಸಂರಕ್ಷಿಸಲು ನಯಸೇನ ಕವಿ , ದನಿ ಎತ್ತಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ .

3. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಶ್ರೀವಿಜಯ ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಕನ್ನಡನಾಡಿನ ಶ್ರೀಸಾಮಾನ್ಯರೂ ಸಹ ಹೇಗೆ ಕಾವ್ಯ ರಚನಾ ಶಕ್ತಿಯನ್ನು ಹೊಂದಿದ್ದರೆಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಕನ್ನಡ ನಾಡಿನ ಸಾಮಾನ್ಯಜನರು ಓದು – ಬರೆಹ ಕಲಿಯದಿದ್ದರೂ ಕಾವ್ಯ ಪ್ರಯೋಗಮಾಡುವುದರಲ್ಲಿ ಪರಿಣಿತರಾಗಿದ್ದರು ಎಂದು ಕವಿ ಹೇಳಿದ್ದಾನೆ .

ಸ್ವಾರಸ್ಯ : ಇಲ್ಲಿ ಕನ್ನಡ ನಾಡಿನ ಜನಪದರ ಕವಿತಾ ಸಾಮರ್ಥ್ಯವನ್ನು ಕುರಿತು ಕವಿ ಹೆಮ್ಮೆಯಿಂದ ಹೊಗಳಿರುವುದು ಸ್ವಾರಸ್ಯಕರವಾಗಿದೆ .

4. ತಕ್ಕುದೆ ಬೆರೆಸ ಧೃತಮುಮಂ ತೈಲಮುಮಂ ,

ಆಯ್ಕೆ : ಈ ವಾಕ್ಯವನ್ನು ‘ ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನಯಸೇನನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು . ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ .

5. ದಾಳಿಂಬಮಲ್ಲದೊಪ್ಪುವ ಚೆಂದೆಂಗಲ್ಲದೆ .

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಆಂಡಯ್ಯನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಆಂಡಯ್ಯ ಕವಿ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ “ ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ : ಕೆಂಪಾದ ತೆಂಗು ಅಲ್ಲದೆ , ಮಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸಿದ್ದಾನೆ .

ಸ್ವಾರಸ್ಯ : ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಇದು ಸೂಚಿಸುತ್ತದೆ .

9th Standard Kannada Nadu Nudi Poem | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್

 

9th Standard Kannada Nadu Nudi Poem | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್

ಪದ್ಯ ಭಾಗ – 8   ಕನ್ನಡ ನಾಡು ನುಡಿ

  • ಶ್ರೀವಿಜಯ 

ಕೃತಿಕಾರರ ಪರಿಚಯ

9th standard kannada nadu nudi poem summary

ಶ್ರೀವಿಜಯ       

ಶ್ರೀವಿಜಯನು ಕ್ರಿ.ಶ. ಸುಮಾರು 9 ನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದನು . ಈತನು ‘ ಕವಿರಾಜಮಾರ್ಗ ‘ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ .

ನಯಸೇನ : ನಯಸೇನನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೀವಿಸಿದ್ದನು .

ಈತನು ‘ ಧರ್ಮಾಮೃತ ‘ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ . ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ .

ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ .

ನೇಮಿಚಂದ್ರ : ನೇಮಿಚಂದ್ರನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಜೀವಿಸಿದ್ದನು

ಈತನು ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ . ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .

ಮಹಲಿಂಗರಂಗ : ಮಹಲಿಂಗರಂಗನು ಕ್ರಿ.ಶ. ಸುಮಾರು 17 ನೆಯ ಶತಮಾನದಲ್ಲಿ ಜೀವಿಸಿದ್ದನು . ಈತನು ‘ ಅನುಭವಾಮೃತ ‘ ಎಂಬ ಕೃತಿಯನ್ನು ರಚಿಸಿದ್ದಾನೆ . ಇವನ ನಿಜನಾಮ ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ , ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ .

ಆಂಡಯ್ಯನು ಕ್ರಿಶ ಸುಮಾರು 13 ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿ ಇದ್ದನು . ಇವನು ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ .

‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

ಆಶಯ ಭಾವ

ನಮ್ಮ ಕನ್ನಡ ನಾಡು ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರ ಹೊಗಳಿರುವುದನ್ನು , ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು . ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ತರಲ್ಲದಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ .

ನಯಸೇನನು ನಮ್ಮ ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯವಾಗುವುದನ್ನು ಸಹಿಸದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸುತ್ತಾನೆ .

ನೇಮಿಚಂದ್ರನು ಕನ್ನಡ ನಾಡಿನ ಶ್ರೇಷ್ಠಕಾವ್ಯಗಳ ರಚನೆಯ ಬಗ್ಗೆ ಹೊಗಳಿದ್ದಾನೆ . ಮಹಲಿಂಗರಂರನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂಬುದನ್ನು ಹಲವು ಉಪಮೇಯಗಳೊಂದಿಗೆ ಹೊಗಳಿ ಸಂಸ್ಕೃತಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾನೆ .

ಆಂಡಯ್ಯನು ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ಹೀಗೆ ಕನ್ನಡನಾಡಿನ ಪ್ರಕೃತಿ , ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ ,

ಪದಗಳ ಅರ್ಥ

ಅರಿದು – ತಿಳೆದು ;

ಚದುರ ( ದ ) -ಚತುರ ( ತೃ ) ಜಾಣ :

ಪರಿಣಿತ – ತಜ್ಞ  .

ಘೃತ- ತುಪ್ಪ

ಬೆರೆಸು – ಕೂಡಿಸು

ಅಗ್ಗಳ – ಶ್ರೇಷ್ಠ,

ಕಡಲು – ಸಮುದ್ರ

ಮೋಕ್ಷ – ಮುಕ್ತಿ

ಆರಯ – ಪಾಲನೆ

ಪದ- ಕ್ರಮ , ರೀತಿ

ಮತಿಗಳು – ಪ್ರತಿಭಾವಂತರು ;

ತೈಲ – ಎಣ್ಣೆ ;

ಸಕ್ಕದ ( ದ್ಧ ) – ಸಂಸ್ಕೃತ ( ತ್ಸ )

ಕಟ್ಟುಗೆ – ಸೇತುವೆ

ನರ – ಅರ್ಜುನ

ಉಷ್ಣ – ಶಾಖ ;

ಆ ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

kannada nadu nudi poem notes question answer

1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ

2 , ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .

3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,

ಆ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ .

9th standard kannada nadu nudi padya Answer in two to three sentences.

1. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : “ ಪದನಡೆದು ನುಡಿಯಲುಂ ನುಡಿ ದುದನಜೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಜೆತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ ”

ಅಂದರೆ ಕನ್ನಡ ನಾಡಿನ ಜನತೆ ಕ್ರಮವರಿತು ನುಡಿಯಬಲ್ಲರು ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರು ಕಾವ್ಯ ರಚಿಸುವಂತಹ ಪರಿಣತರು ಕನ್ನಡನಾಡಿನ ಜನತೆ ನಿಜಕ್ಕೂ ಚತುರರು ,

ಬುದ್ಧಿವಂತರು ಎಂದು ನಾಡಿನ ಜನಪದರ ಕಾವ್ಯರಚಿಸುವಂತಹ ಪರಿಣತಿಯನ್ನು ಕುರಿತು ಹೇಳಿದ್ದಾನೆ .

2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : “ ಸಕ್ಕದಮಂ ಪೇಡೆ ನೆಜ ಸಕ್ಕದಮಂ ಪೇಟಿ ಶುದ್ಧ ಕನ್ನಡದೊಳ್ ತಂ ದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರೆಸಿ ಧೃತಮುಮಂ ತೈಲಮುಮಂ ” ನಮಗೆ ತುಪ್ಪವೂ ಬೇಕು , ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ – ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ

ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ . ಶುದ್ದ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ . ಕವಿ ನಯಸೇನ ,

3. ಕವೀಂದರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : “ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರಸೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ ಕೃತಿಬಂಧದೊಳ ಕಟ್ಟಿದರ್ ಮುಟ್ಟಿದರೆತ್ತಿ

ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ ” ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ .

4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : “ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು ” ?

ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ ಆಗಿದೆ . ಆದ್ದರಿಂದ ಕನ್ನಡ ಭಾಷೆಯಿಂದಲೇ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲಿದೆ ಎಂದು ಕವಿ ಮಹಲಿಂಗರಂಗ ಪ್ರಶ್ನಿಸಿದ್ದಾರೆ

5. ಕನ್ನಡ ನಾಡಿನ ಪಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ?

ಉತ್ತರ : “ ಮಲ್ಲಿಗೆಯಲ್ಲದೆ ಸಂಪಗೆಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ಗಲ್ಲದೆ ಮಾವಲ್ಲದೆ ಕೌಂ ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ” ಮಲ್ಲಿಗೆ , ಸಂಪಿಗೆ , ದಾಳಿಂಬೆ , ಒಪ್ಪುವ ಚಂದದ ಮಾವು, ತೆಂಗು, ಬಾಳೆ ಹೀಗೆ ಹಲವಾರು ಗಿಡ ಮರಗಳಿಂದ ಕೂಡಿರುವ ಕನ್ನಡನಾಡು ಅತ್ಯಂತ ಸಂಪದ್ಭರಿತವಾಗಿದೆ ಎಂದು ಕವಿ ಆಂಡಯ್ಯನವರು ಕನ್ನಡನಾಡಿನ ಪ್ರಾಕೃತಿಕ ವರ್ಣನೆಯನ್ನು ಸಾರಿದ್ದಾರೆ .

ಇ ) ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ನಾಡಿನ ವಿಸ್ತಾರ , ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ . ಕನ್ನಡ ಸಂಸ್ಕೃತಿ , ಸೊಬಗು ವೈಭವ , ಸೌಂದರ್ಯ ಅಪೂರ್ವ ಹಾಗೂ ಅವಿಸ್ಮರಣೀಯ .

ಸಂಸ್ಕೃತ ಪ್ರಭಾವ ದಟ್ಟವಾಗಿದ್ದ ಆ ಕಾಲದಲ್ಲಿ ಕನ್ನಡದ ಹಿರಿಮೆ ಹಾಗೂ ಸಂಸ್ಕೃತಿಯನ್ನು ಮೆರೆದ ಸಾಹಸ ಅವರದು .

ಕನ್ನಡನಾಡು ವಿಸ್ತಾರವಾದ ಭೂಮಿ , ಇಲ್ಲಿನ ಜನ ಪ್ರತಿಭಾ ಸಂಪನ್ನರು , ವಿಶೇಷವಾಗಿ ‘ ಕುಣಿತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ’ಕಾವ್ಯ ಸೃಷ್ಟಿಯಲ್ಲಿ ಮೇಲುಗೈ ಪಡೆದವರು .

ಇಲ್ಲಿನ ಪ್ರಾಕೃತಿಕ ಸಂಪತ್ತು ಶ್ರೀಮಂತವಾದುದು ಭೌಗೋಳಿಕ ಹರವಿನ ಸಾಂಸ್ಕೃತಿಕ ವೈಭವ ಮನೋಹರವಾಗಿದೆ . ಇಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗ ಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ .

2. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲು ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ ಕನ್ನಡ ನಾಡಿನ ಜನತೆ ಕ್ರಮವರಿತು ನಡೆಯಬಲ್ಲರು , ನುಡಿದದ್ದನ್ನು ಅರಿತು ಪಾಲನೆ ಮಾಡಬಲ್ಲರು .

ಕಾವ್ಯರಚಿಸುವಂತಹ ಪರಿಣತರು , ಕನ್ನಡ ನಾಡಿನ ಜನತೆ ನಿಜಕ್ಕೂ ಚತುರರು ಎಂದು ಶ್ರೀ ವಿಜಯ ತನ್ನ ಕವಿರಾಜಮಾರ್ಗದಲ್ಲಿ ತಿಳಿಸಿದ್ದಾನೆ . ನಮಗೆ ತುಪ್ಪವೂ ಬೇಕು , ಎಣ್ಣೆಯು ಬೇಕು , ಸಂಸ್ಕೃತವೂ ಬೇಕು .

ಕನ್ನಡವೂ ಬೇಕು , ಆದರೆ ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ ಕನ್ನಡ ಸಂಸ್ಕೃತದ ಮಿಶ್ರಣಬೇಡ ಎಂದಿದ್ದಾನೆ . ಶುದ್ಧ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ

ಕವಿ ನಯಸೇನ , ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ , ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟವಾದ ಕೃತಿಗಳನ್ನು ರಚಿಸಿದರು

ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಟತೆಯನ್ನು ವರ್ಣಿಸಿದ್ದಾನೆ ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ

ಆಗಿದೆ ಆದ್ದರಿಂದ ಕನ್ನಡ ಭಾಷೆಯಿಂದಲೆ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲೆನಿದೆ ಎಂದು ಕವಿ ಮಹಲಿಂಗರಂಗರು ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಭಿಮಾನದಿಂದ ನುಡಿದಿದ್ದಾರೆ

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ , ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿರಾಜಮಾರ್ಗಕಾರ ಶ್ರೀವಿಜಯ ಕನ್ನಡ ನಾಡಿನ ಜನಪದರನ್ನು ಹೊಗಳುವ ಸಂದರ್ಭದಲ್ಲಿ ಹೇಳಿದ್ದಾನೆ . ಪ್ರಾಚೀನ ಜನಪದರಿಗೆ ಅಕ್ಷರದ ಅರಿವು ಇಲ್ಲದಿದ್ದರು ಸಹ ,

ದೇಶಿ ನುಡಿಯಲ್ಲಿ ಉತ್ತಮವಾದ ಸಾಹಿತ್ಯರಚನಾ ಸಾಮರ್ಥ್ಯವನ್ನು ಹೊಂದಿದ್ದರು . ಶಾಸ್ತ್ರ ಸಾಹಿತ್ಯವನ್ನು ಅರಿಯದಿದ್ದರೂ ಅದಕ್ಕೆ ಸರಿಸಮಾನವಾದ ಸಾಹಿತ್ಯವನ್ನು ರಚಿಸಿದ್ದರು ಎಂದು ಹೇಳುವಾಗ ಈ ಮಾತು ಬಂದಿದೆ

ಸ್ವಾರಸ್ಯ : ಕನ್ನಡ ನಾಡಿನ ಜನಪದರ ಸಾಹಿತ್ಯ ಶಕ್ತಿಯ ಬಗ್ಗೆ , ಕನ್ನಡ ನಾಡು , ನುಡಿ , ಜನತೆಯ ಬಗೆಗಿರುವ ಈ ಮಾತುಗಳು ಸ್ವಾರಸ್ಯಕರವಾಗಿವೆ .

2. ತಕ್ಕುದೆ ಬೆರೆಸಲೆ ಧೃತಮುಮಂ ತೈಲಮುಮಂ .

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ “ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅನೇಕ ಕವಿಗಳು ಕನ್ನಡದಲ್ಲಿ ಉತ್ತಮ ಕಾವ್ಯಗಳನ್ನು ರಚಿಸಿದರೂ ಅದನ್ನು ಸಂಸ್ಕೃತಮಯವಾಗಿ ಮಾಡಿಬಿಟ್ಟರು . ಇದನ್ನು ಕಂಡ ಕವಿ ನಯಸೇನ ನಮಗೆ ತುಪ್ಪವೂ ಬೇಕು ,

ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ ತುಪ್ಪದ ಆಸ್ವಾದು ಮಿಶ್ರಣ ಬೇಡ ಎಂದು ಹೇಳುವ ಸಂದರ್ಭದಲ್ಲಿ ಕವಿ ನಯಸೇನನು ಈ ಮಾತನ್ನು ಹೇಳಿದ್ದಾನೆ .

ಸ್ವಾರಸ್ಯ : ಎಣ್ಣೆ ತುಪ್ಪ ಹೇಗೆ ಬೇರೆ ಬೇರೆ ರುಚಿಯಾಗಿರುತ್ತವೆಯೇ ಹಾಗೆಯೇ ಕನ್ನಡ ಭಾಷೆ , ಸಂಸ್ಕೃತ ಭಾಷೆಗಳು ಸಹ ಅದರಿಂದ ಇವುಗಳ ಮಿಶ್ರಣ ಕಾವ್ಯ ರಚನೆ ಬೇಡ ಎಂಬ ಮಾತಿನಲ್ಲಿ ಕನ್ನಡ ಭಾಷೆಯ ಬಗ್ಗೆ ತೋರಿರುವ ಅಭಿಮಾನ ಸ್ವಾರಸ್ಯಕರವಾಗಿದೆ .

3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ: ಕಪಿ ಸಂತತಿಯು ಕಡಲಿಗೆ ಸೇತುವೆಯನ್ನು ಕಟ್ಟಿದಂತೆ , ಹರನು ನರನು ಮುಗಿಲನ್ನು ಗಂಟಲಲ್ಲಿ ಒತ್ತಿ ಹಿಡಿದಂತೆ , ಕನ್ನಡ ಕವಿಗಳು ಹಂತ ಹಂತವಾಗಿ ಕಾವ್ಯಗಳನ್ನು ರಚಿಸುತ್ತಾ ,

ಉತ್ತಮ ಕೃತಿಗಳನ್ನು ರಚಿಸಿ ಕವೀಂದ್ರರೇ ಆದರೆಂದು ಹೇಳುವ ಸಂದರ್ಭದಲ್ಲಿ ನೇಮಿಚಂದ್ರ ಕನ್ನಡ ಕವಿಗಳ ಮಹತ್ವವನ್ನು ತಿಳಿಸುತ್ತಾ ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ನಾಡಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಎಂತಹ ವಿಷಯಗಳನ್ನಾದರೂ ಕಟ್ಟಿ ಕೊಡುವ ಶಕ್ತಿ ಉಳ್ಳವರು ಎಂದು ಅವರ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

9th Kannada Naadu Nudi | ಕನ್ನಡ ನಾಡು ನುಡಿ ಪದ್ಯದ ನೋಟ್ಸ್

4. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ “ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ ಸಿಗುರು ತೆಗೆದ ಕಬ್ಬಿನಂತೆ , ಉಷ್ಟ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ .

ಮೋಕ್ಷವನ್ನು ಗಳಿಸಿಕೊಳ್ಳಲು ಈ ಭಾಷೆಯೇ ಸಾಕು ಸಂಸ್ಕೃತದಲ್ಲೆನಿದೆ ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕವಿ ಮಹಲಿಂಗರಂಗರವರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ಭಾಷೆಯನ್ನು ಕಲಿಯಲು ಸರಳವೂ , ಸುಂದರವೂ ಆದ ಭಾಷೆಯಾಗಿದೆ ಕನ್ನಡವನ್ನು ಬೇಗ ಕಲಿತು ಮೋಕ್ಷ ಸಂಪಾದನೆ ಮಾಡಬಹುದು ಎಂಬ ಕವಿ ಕನ್ನಡಾಭಿಮಾನದ ಮಾತು ಸ್ವಾರಸ್ಯಕರವಾಗಿದೆ .

5. ದಾಳಿಂಬವಲ್ಲದೊಪುವ ಚೆಂದೆಂ

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕನ್ನಡ ನಾಡು ಮಲ್ಲಿಗೆ , ಸಂಪಿಗೆಯ ಪರಿಮಳವಿದೆ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ . ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಆಂಡಯ್ಯ ಕವಿಗೆ ಕನ್ನಡ ನಾಡು , ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

ಕೊಟ್ಟಿರುವ ಪದ್ಯಭಾಗಗಳನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

ಪದನರದು ನುಡಿಯಲುಂ ನುಡಿ ‌

ದುದನಟಿದಾರಯಲುಮಾರ್ಪರಾ ನಾಡವರ್ಗಳ್|

ಚದುರರ್ ನಿಜದಿಂ ಕುಚಿತೋ‌

ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್|

 

ಮಲ್ಲಿಗೆಯಲ್ಲದೆ ಸಂಪಗೆ|

ಯಲ್ಲದೆ ದಾಳಿಂಬವಲ್ಲದೊಡ್ಡುವ ಚೆಂದೆಂ||

ಗಲ್ಲದೆ ಮಾವಲ್ಲದೆ ಕೌಂ|

ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||                      -ಆಂಡಯ್ಯ

9ನೇ ತರಗತಿ ಹೇಮಂತ ಕನ್ನಡ ಪದ್ಯ ನೋಟ್ಸ್ | 9th Standard Hemanta Poem Notes 2022

 

9ನೇ ತರಗತಿ ಹೇಮಂತ ಕನ್ನಡ ಪದ್ಯ ನೋಟ್ಸ್ | 9th Standard Hemanta Poem Notes 2022

ತರಗತಿ : 9ನೇ ತರಗತಿ

ಪದ್ಯದ ಹೆಸರು : ಹೇಮಂತ

ಕೃತಿಕಾರರ ಹೆಸರು : ಎಸ್ . ವಿ . ಪರಮೇಶ್ವರ ಭಟ್ಟರು

ಕೃತಿಕಾರರ ಪರಿಚಯ



೧೯೧೪ ರ ಫೆಬ್ರವರಿ ೮ ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಹುಟ್ಟಿದ ಎಸ್ . ವಿ . ಪರಮೇಶ್ವರ ಭಟ್ಟರು ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಕನ್ನಡದ ಹಾಗೂ ಕಾಳಿದಾಸರ ಸಂಸ್ಕೃತ ಕೃತಿಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಭರ್ತೃಹರಿಯ ಶತಕತ್ರಯಗಳನ್ನೂ ಜಯದೇವನ ಗೀತಗೋವಿಂದವನ್ನೂ ಅವರು ಕನ್ನಡಿಸಿದರು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪುರಸ್ಕಾರ ಪಡೆದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯರಾಗಿದ್ದರು . “ ಇಂದ್ರಚಾಪ ” , “ ಸುರಹೊನ್ನೆ ” , “ ಉಪ್ಪುಕಡಲು ” , ” ರಾಗಿಣಿ ” ಮುಂತಾದವು ಅವರ ಕೆಲವು ಮುಖ್ಯ ಕೃತಿಗಳು , “ ಹೇಮಂತ ಕವಿತೆಯನ್ನು ಅವರ “ ಗಗನಚುಕ್ಕಿ ” ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ .

kseeb solutions for class 9 kannada poem 5 hemanta notes

ಆಶಯ ಭಾವ

ಡಾ . ಎಸ್ . ವಿ . ಪರಮೇಶ್ವರ ಭಟ್ಟರು ಕನ್ನಡದ ಬಹುಮುಖ್ಯ ಕವಿ . ಇವರು ಕುವೆಂಪು , ಬೇಂದ್ರೆ , ಪುತಿನ ಮುಂತಾದವರ ಸಮಕಾಲೀನರು . ಅವರೆಲ್ಲರ ಕಾವ್ಯಗಳನ್ನು ಬಹಳ ತೀವ್ರವಾಗಿ ಪ್ರಭಾವಿಸಿದವರು . ಎಸ್ . ವಿ . ಪರಮೇಶ್ವರ ಭಟ್ಟರ ಅನೇಕ ಕವಿತೆಗಳು ಜನಮಾನಸದಲ್ಲಿ ನಿಂತಿವೆ . ಅವರ “ ದೀಪ ಹಚ್ಚಾ * ಎಂಬ ಕವಿತೆಯಂತೂ ಪ್ರತಿ ದೀಪಾವಳಿಯ ಸಮಯದಲ್ಲಿ ಕನ್ನಡಿಗರ ಮನೆಮನಗಳಲ್ಲಿ ನಲಿದಾಡುತ್ತದೆ . “ ಹೇಮಂತ ಕವಿತೆಯಲ್ಲಿ ಪರಮೇಶ್ವರ ಭಟ್ಟರು ಹೇಮಂತ ಋತುವಿನಲ್ಲಿ ಪ್ರಕೃತಿಯಲ್ಲಿ ಕಂಡುಬರುವ ದೃಶ್ಯಗಳನ್ನು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ . ಈ ಸಮಯದಲ್ಲಿ ಉತ್ತರ ಗೋಳಾರ್ಧಕ್ಕೆ ಚಳಿಗಾಲ ,

ಉತ್ತರ ಭಾರತದಲ್ಲಂತೂ ಈ ಸಮಯದಲ್ಲಿ ತೀವ್ರವಾದ ಮಂಜುಬೀಳುವ ಕಾಲ . ಪ್ರಕೃತಿ ಈ ಸಮಯದಲ್ಲಿ ಮೈಮುದುರಿ ಕೂರುತ್ತದೆ . ಹಕ್ಕಿಗಳು ಹಾರಾಟವನ್ನು ಕಡಿಮೆ ಮಾಡುತ್ತವೆ . ವೃಕ್ಷಗಳು ಎಲೆಗಳನ್ನುದುರಿಸಿ ಬೋಳಾಗಿ ನಿಲ್ಲುತ್ತವೆ . ಕಾಡುಪ್ರಾಣಿಗಳಿಗೆ ಆಹಾರ ಸಿಗುವುದು ಕಷ್ಟವಾಗುತ್ತದೆ . ಎಷ್ಟೋ ಪ್ರಾಣಿಗಳು ತಟಸ್ಥಾವಸ್ಥೆಗೆ ಜಾರುತ್ತವೆ . ಹಾಗಾದರೆ ಪ್ರಕೃತಿಗೆ ಹೇಮಂತ ಬೇಡವೆ ? ಹೇಮಂತ ಋತುವನ್ನು ಎದುರುಗೊಳ್ಳುವ ಬಗೆಯೆಂತು ಎಂಬುದನ್ನು ಕವಿ ಈ ಕವಿತೆಯಲ್ಲಿ ಚರ್ಚಿಸುತ್ತಾರೆ . ಹೇಮಂತನ ಈ ಕಠಿಣ ಶಾಸನಕ್ಕೆ ತಲೆಬಾಗುವುದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ ಎಂದು ಕೊನೆಯಲ್ಲಿ ಹೇಳುತ್ತಾರೆ . ಋತುಗಳಿಗೆ ತಕ್ಕಂತೆ , ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪ್ರಕೃತಿಯ ಸಹಜಧರ್ಮ ಎಂಬ ಆಶಯ ಕವಿತೆಯದು . ಈ ಕವಿತೆಯನ್ನು ನಮ್ಮ ಜೀವನಗಳಿಗೂ ನಾವು ಅನ್ವಯಿಸಿಕೊಳ್ಳಬಹುದು . ಮನುಷ್ಯನ ಬದುಕೆಂಬುದು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ . ಕೆಲವೊಮ್ಮೆ ಬಾಳಿನಲ್ಲಿ ಕಷ್ಟನಷ್ಟಗಳು ಬರುತ್ತವೆ . ಮನುಷ್ಯನ ಬದುಕು ತೀವ್ರ ಪರೀಕ್ಷೆಗಳಿಗೊಳಗಾಗುತ್ತದೆ . ಆಗ ಆತ ವಿಧಿಯನ್ನು ಹಳಿಯಬಾರದು . ಬಂದಿರುವ ಕಷ್ಟಗಳನ್ನು ಸೈರಿಸಬೇಕು . ಮುಂದೊಂದು ದಿನ ವಸಂತವು ಬಂದೇ ಬರುವುದೆಂಬ ಭರವಸೆಯಿಂದ ಬಾಳನ್ನು ಬಾಳಬೇಕು . ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾಗಿದ್ದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ , ಹೊಸ ಬಿಸಿಲಿಗೆ ಕಾಯಬೇಕು, ಬಂದೆಲ್ಲ ಕಷ್ಟಸುಖಗಳನ್ನು ನೈಸರ್ಗಿಕ ಎಂದು ಸ್ವೀಕರಿಸಬೇಕು – ಎಂಬ ಭಾವ ಕವಿತೆಯದ್ದಾಗಿದೆ .

9ನೇ ತರಗತಿ ಹೇಮಂತ ಕನ್ನಡ ಪದ್ಯ ನೋಟ್ಸ್ 2022

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೇಗಿರುತ್ತವೆ?

ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೂವಿಲ್ಲದೆ ಹಸುರಿಲ್ಲದೆ ಚಿಗುರೆಲೆಗಳಿಲ್ಲದೆ ಬೋಳಾಗಿರುತ್ತವೆ.

2. ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?

ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ.

3. ಕಾನನದ ಹಕ್ಕಿ ಏನು ಮಾಡುತ್ತಿದೆ?

ಕಾನನದ ಹಕ್ಕಿ ಕಣ್ಣೀರನ್ನು ಸುರಿಸುತ್ತಿದೆ.

4. ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?

ಬಿಳಿಯ ಮಂಜು, ಹಿಮದ ಗಾಳಿ, ನಡುಗುತ್ತಿರುವ ನೀರಸ ಲೋಕ, ಬರಡಾಗಿರುವ ಬನ, ಜಡವಾಗಿರುವ ಜನ ಎತ್ತಲೂ (ಎಲ್ಲಿ ನೋಡಿದರೂ) ಕಾಣುತ್ತಿದ್ದಾರೆ.

5. ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಹೇಗೆ ಹರಿಯುತ್ತಿದೆ?

ಮೆಲ್ಲ ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ವೈ ನೆನೆದು ನಡುಗುತ್ತ ಹೇಮಂತ ಋತುವಿನಲ್ಲಿ ತುಂಗೆಯ ತೊರೆಯ ಹರಿಯುತ್ತಿದೆ.

6. ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?

ಹೇಮಂತನ ಕಠಿಣ ಶಾಸನಕ್ಕೆ ( ಕಾಯ್ದೆಗೆ ) ಎಲ್ಲರೂ ತಲೆಬಾಗಬೇಕು ಎಂದು ಕವಿ ಹೇಳುತ್ತಾರೆ.

7. ಜೀವಗಳ ಧರ್ಮ ಯಾವುದು?

ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯಲ್ಲಿ ಸಂಸ್ಕಾರವನ್ನು ಪಡೆಯುವುದೇ ಜೀವಗಳ ಧರ್ಮವಾಗಿದೆ.

II. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?

ಹೇಮಂತನು ಬಂದಿಳಿದಾಗ ಗಿಡಗಳಲ್ಲಿ ಹೂವಿಲ್ಲ, ಹಸಿರಿಲ್ಲ, ಚಿಗುರೆಲೆಗಳಿಲ್ಲ. ಪ್ರಕೃತಿಯಲ್ಲಿ ದುಂಬಿಗಳ ದನಿ ಇಲ್ಲ. ಹಕ್ಕಿಗಳ ಹಾಡಿಲ್ಲ. ಹೂವಿನ ಪರಿಮಳ ತರುವ ಗಾಳಿ ಇಲ್ಲ.

2. ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?

ಹೊಲಗದ್ದೆಗಳು ಮಂಜಿನ ಮುಸುಕನ್ನು ಹೊದ್ದು ಮಲಗಿವೆ. ನದಿಯು ಮೆಲ್ಲಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ. ಇದು ಹೊಲಗದ್ದೆಗಳ ಮೇಲೆ ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ.

3. ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?

ಹೇಮಂತ ಋತುವಿನಲ್ಲಿ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಮರ ಬೋಳಾಗುತ್ತದೆ. ಮರಗಳಲ್ಲಿ ಹೂವಿಲ್ಲ ಚಿಗುರೆಲೆಗಳಿಲ್ಲ ಹಸಿರು ಇಲ್ಲ. ಮರಗಳ ಸ್ಥಿತಿ ನೋಡಿ ಕಾನನದ ಹಕ್ಕಿ ಕೂಡ ಕಣ್ಣೀರು ಸುರಿಸುತ್ತಿದೆ ಎಂದು ಕವಿ ಮರಗಳ ಸ್ಥಿತಿಯನ್ನು ವರ್ಣಿಸಿದ್ದಾರೆ.

4. ಹೇಮಂತನ ಕಠಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?

ಮನುಷ್ಯನ ಬದುಕು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟ ನಷ್ಟಗಳು ಬರುತ್ತವೆ. ಆದ್ದರಿಂದ ವಿಧಿಯನ್ನು ಹಳಿಯಬಾರದು. ಹೇಮಂತನ ಕಠಿಣ ಶಾಸನವನ್ನು ನೈಸರ್ಗಿಕ, ನಿಸರ್ಗದ ನಿಯಮ ಎಂದು ಸ್ವೀಕರಿಸಬೇಕು. ಹೊಸ ಕಾಲಕ್ಕೆ ಮಾನವ ಕಾಯಬೇಕು.

9th Class Tatva Padagalu Poems Notes | 9ನೇ ತರಗತಿ ತತ್ವಪದಗಳು ಪದ್ಯ ನೋಟ್ಸ್

 

9th Class Tatva Padagalu Poems Notes | 9ನೇ ತರಗತಿ ತತ್ವಪದಗಳು ಪದ್ಯ ನೋಟ್ಸ್'

ಪದ್ಯ ಭಾಗ – 6   ತತ್ವಪದಗಳು

‌ –  ಕಡಕೋಳ ಮಡಿವಾಳಪ್ಪ – ಶಿಶುನಾಳ ಶರೀಫ 

ಕೃತಿಕಾರರ ಪರಿಚಯ

ಕಡಕೋಳ ಮಡಿವಾಳಪ್ಪ ಅವರು ( ಕ್ರಿ . ಶ . 1765 ) ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜನಿಸಿದರು .

ಇವರ ತಾಯಿ ಗಂಗಮ್ಮ , ತಂದೆ ವಿರೂಪಾಕ್ಷಯ್ಯ ಇವರು ಕಲಬುರ್ಗಿಯ ಶ್ರೀಶರಣ ಬಸವೇಶ್ವರರ ನಿರ್ದೇಶನದಂತೆ ಕಲಕೇರಿ ಮರುಳಾರಾಧ್ಯರಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ . ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನದೇ ಆಗಿರುವ ಪ್ರತಿಭೆಯನ್ನು ಮೆರೆದ ವಿಶಿಷ್ಟ ಕವಿ ಎನಿಸಿಕೊಂಡಿದ್ದಾರೆ .

ಕಲಬುರಗಿ ಜಿಲ್ಲೆ 104 ಜೇವರ್ಗಿ ತಾಲ್ಲೂಕು ಯಡ್ರಾಮಿ ಬಳಿಯ ಕಡಕೋಳ ಗ್ರಾಮವು ಇವರ ಕಾರ್ಯಕ್ಷೇತ್ರ ಇಲ್ಲಿ ಕಡಕೋಳ ಮಡಿವಾಳಪ್ಪ ಅವರ ಮಠವಿದೆ . ಎಂಬ ಅಂಕಿತವನ್ನು ಇಟ್ಟುಕೊಂಡು ನೂರಾರು ‘ ಮಹಾಂತೇಶ ‘ ತತ್ತ್ವಪದಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .

‘ ಗುರುಕರುಣೆ ‘ ತತ್ತ್ವಪದವನ್ನು ‘ ಆಯ್ದ ತತ್ತ್ವಪದಗಳು ‘ ( ಪುಟ ಸಂಖ್ಯೆ 4 ) ಸಂಕಲನದಿಂದ ಆಯ್ದು ನಿಗದಿಪಡಿಸಿದೆ .

ಆಶಯ ಭಾವ

ಕಡಕೋಳ ಮಡಿವಾಳಪ್ಪ ಅವರ ತತ್ತ್ವಪದವು ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ .

ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣೆ ಅತ್ಯಗತ್ಯ . ಅವರು ಸಾಧು ಸತ್ಪುರುಷರ ಸೇವೆಯನ್ನು ಮಾಡುವುದು . ಹೀನ ಮನುಷ್ಯರ ಸ್ನೇಹವನ್ನು ಮಾಡದಿರುವುದು . ಸಮಯವನ್ನು ವ್ಯರ್ಥಮಾಡದಿರುವುದು ಉತ್ತಮ ಗುಣಗಳು ಎಂದು ಅಭಿಪ್ರಾಯಪಡುತ್ತಾರೆ .

ಆಶನ – ಅನ್ನ , ಆಹಾರ ,

ಕೃತಿಕಾರರ ಪರಿಚಯ



ಸಂತ ಶಿಶುನಾಳ ಶರೀಫ ತತ್ತ್ವಪದ ರಚನಾಕಾರರಾದ ಇವರು ( ಕ್ರಿಸ್ತ ಶಕ 1819 ) ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳದವರು , ಬಾಲ್ಯದ ಹೆಸರು ಮಹಮ್ಮದ್ ಶರೀಫ , ಗುರು ಕಳಸದ ಗೋವಿಂದ ಭಟ್ಟರು .

ಕರ್ನಾಟಕದ ಕಬೀರರೆಂದೇ ಶರೀಫರು ಪ್ರಸಿದ್ಧರು . ಶಿಶುನಾಳಾಧೀಶ , ಶಿಶುನಾಳೇಶ ಅಂಕಿತ . ಇವರು ನೂರಾರು ತತ್ವಪದಗಳನ್ನು ರಚಿಸಿದ್ದಾರೆ . ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ( ಪುಟ 79 ) ಆಯ್ದು ನಿಗದಿಪಡಿಸಿದೆ .

ಆಶಯ ಭಾಷೆ

ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ . ಕೆಲವು ಹೆಚ್ಚು ಮತ್ತೆ ಕೆಲವು ಕಡಿಮೆ ಉಪಯೋಗಿ ವಸ್ತುಗಳಾಗಿವೆ . ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು ,

ಇದರಂತೆ ಬಿದಿರೂ ಬಹು ಉಪಯೋಗಿ , ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವ ಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ

ಪದಗಳ ಅರ್ಥ

ಏಕದಂಡಿ – ತಂತೀ ವಾದ್ಯ .

ಚಕ್ಕಡಿ – ಎತ್ತಿನಗಾಡಿ .

ದಿವಿನಾಗು – ಮೈತುಂಬಿಕೊಳ್ಳು ;

ಮರ ( ಮೊರ ) – ಕೇರುವ ಸಾಧನ , ಗೆರಸೆ ,

ದಂಡಿಗೆ – ಪಲ್ಲಕ್ಕಿ ಹೊರುವ ಕೋಲು ;

ಬಹುಪಾಡ – ಬಹಳ ಕಷ್ಟ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

9th Standard kannada lessons Tatva Padagalu Poems question and answers

1. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ ?

ಉತ್ತರ : ಗುರುಕರುಣೆ ಇಲ್ಲದವನ ಸ್ನೇಹ ಸಾಯುವತನಕ ಬೇಡ ಎಂದಿದ್ದಾರೆ .

2. ಯಾರ ಸ್ನೇಹವನ್ನು ಮಾಡಿ ಕೆಡಬಾರದು ?

ಉತ್ತರ : ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು .

3. ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ ?

ಉತ್ತರ : ತತ್ತ್ವಪದಕಾರರು ಸಾಧು – ಸತ್ಪರುಷರ ಸೇವೆ ಮಾಡಬೇಕು ಎಂದಿದ್ದಾರೆ .

4. ಬಿದಿರು ಹೇಗೆ ಬೆಳೆಯಿತು ?

ಉತ್ತರ : ಬಿದಿರು ಹುಟ್ಟುತ್ತಾ ಹುಲ್ಲಿನಂತಿದ್ದ ಬೆಳೆಬೆಳೆಯುತ್ತ ದಿವಿಯಾಗುತ್ತದೆ .

5. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ ?

ಉತ್ತರ : ಬಿದಿರಿನ ಚಪ್ಪರವು ನೆರಳನ್ನು ಕೊಡುತ್ತದೆ .

6. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ ?

ಉತ್ತರ : ಬಿದಿರು ಶೀಶುನಾಳಧೀಶನಿಗೆ ಓಲಗವಾಗುತ್ತದೆ .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

1. ಬಿದಿರು ಮಕ್ಕಳಿಗೆ , ರೈತರಿಗೆ ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?

ಉತ್ತರ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ ಉಪಯೋಗವಾಗುತ್ತದೆ . ಮಕ್ಕಳು ನಿದ್ದೆ ಮಾಡಲು ಬಹು ಉಪಯೋಗಿ , ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಸಹಕಾರಿಯಾದ ಕೂರಿಗೆಯಾಗಿ ಉಪಯೋಗವಾಗಿದೆ . ಮಹಾತ್ಮರ ಕೈಯಲ್ಲಿನ ಬೆತ್ತವಾಗಿ ಬಿದಿರು ಉಪಯೋಗವಾಗಿದೆ .

2. ಧಾನ್ಯಗಳನ್ನು ಕುಟ್ಟಲು , ಬೀಸಲು , ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ ?

ಉತ್ತರ : ಬಿದಿರು ಧಾನ್ಯಗಳನ್ನು ಕುಟ್ಟಲು ಒನಕೆಯಾಗಿ ಬೀಸುವ ಕಲ್ಲಿನ ಗೂಟವಾಗಿ ಅಕ್ಕಿ ರಾಗಿ , ಕೇರುವ ಮರವಾಗಿ ಸಹಾಯಕವಾಗಿರುತ್ತದೆ .

3. ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ ?

ಉತ್ತರ : ಗುರುಕರುಣವಿಲ್ಲದವನ ಸ್ನೇಹ ಸಾವುತನಕ ಮಾಡಬಾರದು . ಮಾತಿನೊಳಗ ಮಾತಿಲ್ಲದವನ ಸ್ನೇಹ ಜಾತಿಜನ್ಮಕಬೇಡ . ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ ,

ಮಾತಿನೊಳಗೆ ಮಾತಿಲ್ಲದವನ ಸ್ನೇಹ ಜನ್ಮ ಇರುವವರೆಗೆ ಬೇಡ , ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ತತ್ತ್ವಪದಕಾರರು ಹೇಳಿದ್ದಾರೆ .

 

4. ‘ ಗುರುಕರುಣೆ ‘ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ತ್ವ ಸಾರಿದ್ದಾರೆ ?

ಉತ್ತರ : ಅಕ್ಕ – ತಂಗಿಯರು ಎಂದು ಬಾಯಲಿ ಕರೆದು ಅವರನ್ನು ಕೆಟ್ಟದಾಗಿ ನೋಡಬಾರದು , ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡಬಾರದು . ಬರೀ ಊಟ ಮಾಡುತ್ತಾ ಸಮಯವನ್ನು ವ್ಯರ್ಥ ಹಾಳುಮಾಡಬಾರದು .

ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು . ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .

ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ , ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಯಾವಾಗಲೂ ಗುರು ಮಹಾಂತೇಶ ಧ್ಯಾನವನ್ನು ಮಾಡುತ್ತಾ ಜೀವನ ನಡೆಸಬೇಕು .

 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

1. ‘ ಗುರುಕರುಣೆ ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಕಡಕೋಳ ಮಡಿವಾಳಪ್ಪರವರ ತತ್ತ್ವಪದದಲ್ಲಿ ಸ್ನೇಹ , ಸಂಬಂಧ , ಸೇವೆಗಳ ಬಗ್ಗೆ ವಿವರಿಸಿದ್ದಾರೆ . ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣೆ ಅತ್ಯಗತ್ಯ.ಯಾವ ವ್ಯಕ್ತಿಯು ಗುರುಗಳ ಮೇಲೆ ಗೌರವ ,

ಅಭಿಮಾನ ಇಲ್ಲವೋ , ಗುರುಗಳ ಅನುಗ್ರಹ , ಕೃಪೆಯನ್ನು ಗಳಿಸಿಲ್ಲವೋ , ಗುರುಕರುಣೆ ಇಲ್ಲದವನ ಸ್ನೇಹ ಸಾಯುತನಕ ಮಾಡಬಾರದು ಎಂದಿದ್ದಾರೆ ತತ್ತ್ವಪದಕಾರರು . ಸಾಧು ಸತ್ಪರುಷರ ಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು .

ಕೆಟ್ಟ ಮನುಷ್ಯರ ಸ್ನೇಹವನ್ನು ಮಾಡಿ ಕೆಡಬಾರದು . ಹೀನ ಮನುಷ್ಯರ ಸ್ನೇಹವನ್ನು ಮಾಡದಿರುವುದು ಒಳ್ಳೆಯದು ಎಂದಿದ್ದಾರೆ . ಅಕ್ಕ ತಂಗಿಯರೆಂದು ಬಾಯಿಯಲ್ಲಿ ಕರೆದು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು . ನಿತ್ಯ ಕಾಲದಲ್ಲಿ ಆಹಾರವನ್ನು ಸೇವಿಸುತ್ತಾ ಸಮಯವನ್ನು ವ್ಯರ್ಥ ಮಾಡಬಾರದು .

ಮೇಲು ಕೀಳೂ ಎಂಬ ಭಾವನೆಯಿಲ್ಲದೆ , ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .

ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ . ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಗುರು ಮಹಾಂತೇಶನ ಸೇವೆಯನ್ನು ಮಾಡುತ್ತಾ ಇರುವುದೇ ಉತ್ತಮ ಗುಣಗಳು ಎಂದು ತತ್ತ್ವಪದಕಾರರು ಅಭಿಪ್ರಾಯ ಪಡುತ್ತಾರೆ .

2. ‘ ಬಿದಿರು ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಸಂತ ಶಿಶುನಾಳ ಶರೀಫರ ತತ್ತ್ವಪದದಲ್ಲಿ ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ . ಅದರಲ್ಲೂ ಕೆಲವು ವಸ್ತುಗಳು ಬಹು ಉಪಯೋಗಿಗಳು . ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು ಇದರಂತೆ

ಬಿದಿರು ಬಹು ಉಪಯೋಗಿ , ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ .

ಹುಟ್ಟುತ ಹುಲ್ಲು ನಾನಾದೆ ಬೆಳೆ ಬೆಳೆಯುತ್ತ ದಿವಿನಾದೆ ಮಕ್ಕಳನ್ನು ತೂಗುವತೊಟ್ಟಿಲಾಗುತ್ತದೆ . ಪಲ್ಲಕ್ಕಿಯ ದಂಡಿಗೆಯಾಗಿ , ಪತ್ರೆಗೆ ಬುಟ್ಟಿ ತಾನಾಗಿ , ಮಹಾತ್ಮರ ಕೈಗೆ ಬೆತ್ತವಾಗಿ , ಒನಕೆಯಾಗಿ , ಅಂಬಿಗಗೆ ಕೋಲಾಗಿ ಬಹು ಉಪಯೋಗಿ , ರೈತನಿಗೆ ಬಿತ್ತುವ ಕೂರಿಗ್ಯಾಗಿ ಉಪಯೋಗವಾಗುತ್ತದೆ .

ಬೀಸುಕಲ್ಲಿನ ಗೂಟವಾಗಿ ಮೊರವಾಗಿ ಬೆತ್ತವಾಗಿ ಊರುಗೋಲಾಗಿ , ಕೋಲಾಗಿ ಬಂಡಿಯಾಗಿ ನಂದಿ ಕೋಲಾಗಿ , ಚಪ್ಪರವಾಗಿ ಕೊಳಲು , ಮಗುವಿನಿಂದ ಮುದುಕರವರೆಗೆ ಎಲ್ಲರ ಅಗತ್ಯಗಳನ್ನು ಪೂರೈಸುವಲ್ಲಿ ಬಿದಿರು ಬಹು ಉಪಯೋಗಿ

, ಆಡುವ ಕೋಲಾಗಿ , ಹೂಡಲು ಚಕ್ಕಡಿಯಾಗಿ , ಸಿದ್ದರಾಮೇಶಗೆ ನಂದಿ ಕೋಲಾಗಿ , ನೆರಳಿಗೆ ಚಪ್ಪರವಾಗಿ , ಏಕದಂಡಿಗೆ ಕೊಳವೆಯಾಗಿ , ಶಿಶುನಾಳಾಧೀಶಗೆ ಓಲಗವಾಗಿ ಬಿದಿರು ಸಾರ್ಥಕವಾಗುತ್ತದೆ .

 

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಬೇಡ

ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗುರುಕರುಣೆಯಿಲ್ಲದವನ ಸ್ನೇಹವನ್ನು ಸಾಯುತನಕ ಮಾಡಬಾರದು ಮಾತಿನೊಳಗೆ ಮಾತಿಲ್ಲದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ಎಂದು ಹೇಳುವ ಸಂದರ್ಭದಲ್ಲಿ ತತ್ತ್ವಪದಕಾರರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಮಾನವನು ಹೇಗೆ ಬದುಕಬೇಕೆಂದು , ಯಾರ ಸ್ನೇಹವನ್ನು ಮಾಡಬೇಕು . ಯಾರ ಸ್ನೇಹವನ್ನು ಮಾಡಬಾರದು ಎಂಬ ಸಂದೇಶವನ್ನು ನೀಡಿರುವುದು ಸ್ವಾರಸ್ಯಕರವಾಗಿದೆ .

2 , “ ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ ”

ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮನುಷ್ಯನು ಕೆಲಸ ಮಾಡುವ ಸಮಯದಲ್ಲಿ ಊಟವನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು . ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ತತ್ತ್ವಪದಕಾರರು ಹೇಳಿದ್ದಾರೆ .

ಸ್ವಾರಸ್ಯ : ಮನುಷ್ಯನ ಜೀವನವು ಅಮೂಲ್ಯವಾದದು ಅದನ್ನು ಸುಮ್ಮನೆ ಊಟ ಮಾಡಿಕೊಂಡು ವ್ಯರ್ಥ ಮಾಡಬಾರದು . ಉಪಯುಕ್ತವಾದ ಕೆಲಸದಲ್ಲಿ ತೊಡಗಿ ಸಾರ್ಥಕತೆ ಮಾಡಿಕೊಳ್ಳಬೇಕು ಎಂಬುದು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .

3. “ ಮಹಾತ್ಮರ ಕೈಗೆ ಬೆತ್ತ ನಾನಾದೆ ”

ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿದೆ . ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಉಪಯೋಗವಾಗುತ್ತದೆ . ಮಹಾತ್ಮರ ಕೈಗೆ ಬೆತ್ತವಾಗಿ ಬಿದಿರು ಉಪಯೋಗುತ್ತದೆ . ಬಿದಿರಿನ ಉಪಯೋಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಬಿದಿರಿನ ಉಪಯೋಗಗಳು ಸ್ವಾರಸ್ಯಕರವಾಗಿ ಮೂಡಿ ಬಂದಿವೆ .

4. “ ಬೆಳೆ ಬೆಳೆಯುತ್ತ ದಿವಿನಾದ ”

ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ತು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಿದಿರು ಹುಟ್ಟುತ್ತಾ ಹುಲ್ಲಾಗಿ ಬೆಳೆಬೆಳೆಯುತ್ತಾ ದಿವಿಯಾಗಿ ಬೆಳೆದು ವಿವಿಧ ಉಪಯೋಗಿ ವಸ್ತುಗಳನ್ನು ಮಾಡಲು ಅನುಕೂಲಕರವಾಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ

ಸ್ವಾರಸ್ಯ : ಬಿದಿರು ಯಾವ ರೀತಿ ಹುಟ್ಟಿ ಬೆಳೆಯುತ್ತದೆ ಎಂಬುದನ್ನು ತತ್ವಪದಕಾರರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ .

 

ಉ ) ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ ,

 

 

1. ‘ ಅಶನ ‘ ಪದದ ಅರ್ಥ ಆಸೆ…………..

( ಅನ್ನ . ಬಟ್ಟೆ, ಆಸೆ, ನೀರು)

2. ‘ ಬೆತ್ತ ‘ ಪದದ ತತ್ಸಮರೂಪ  ……………

( ವೆತ್ತ,  ವೇತ್ರ,  ಬೆತ್ರ, ಪೆತ್ತ )

3. ‘ ಕರುಣೆ ‘ ಪದದ ವಿರುದ್ಧಾರ್ಥಕ ಪದ…………

( ಅನುಕರಣೆ, ನಿಕರುಣೆ, ನಿಷ್ಕರುಣೆ, ಅಪಕರುಣೆ )

4. ‘ ಅಂಬಿಗ ‘ ಎಂದರೆ………..

( ರೈತ ಗಾಡಿ ಹೊಡೆಯುವವ, ಗುರು ದೋಣಿ ನಡೆಸುವವ)

 

1. ಅನ್ನ

2. ಬೆತ್ತ

3. ನಿಷ್ಕರುಣೆ

4. ದೋಣಿ ನಡೆಸುವವ

ಊ ) ಮೊದಲೆರಡು ಪದಗಳಿಗೆ ಸಂಬಂಧ ಇರುವಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .

1. ಹಿಂದು : ಮುಂದು : ಹಿರಿದು :……………….

2 . ಮಾತಿಲ್ಲದವನ : ಲೋಪ ಸಂಧಿ :: ಕರುಣವಿಲ್ಲದವನ :…………….

3. ಮನುಷ್ಯನ : ಷಷ್ಠಿ ವಿಭಕ್ತಿ :: ಕಾಲದಲ್ಲಿ :…………….

4. ಪತ್ರ : ಎಲೆ : ಚಕ್ಕಡಿ :……………….

 

1. ಕಿರಿದು

2. ವಕಾರಾಗಮಸಂಧಿ

3. ಸಪ್ತಮಿ ವಿಭಕ್ತಿ

4. ಎತ್ತಿನಗಾಡಿ

 

 

ಅ . ಕೊಟ್ಟಿರುವ ಪದ್ಯಗಳನ್ನು ಕಂಠಪಾಠ ಮಾಡಿರಿ .

ಮಾತಿನೊಳಗೆ ಮಾತಿಲ್ಲದವನ ಸ್ನೇಹ

ಜಾತಿಜನ್ಮಕಬೇಡ |

ಹೀನ ಮನುಷ್ಯನ ಸ್ನೇಹ ಮಾಡಿ

ನೀನು ಕೆಡಲಿಬೇಡ

 

ಬೀಸುವ ಗೂಟವಾದೆ

ಕೇರುವ ಮರವಾದೆ

ಮುದುಕರಿಗೆ ಊರುವ ಬೆತ್ತವಾದೆ

 

ಆಡುವ ಕೋಲಾದೆ

ಹೂಡಲು ಚಕ್ಕಡಿಯಾದೆ

ಸಿದ್ದರಾಮೇಶಗೆ ನಂದಿ ಕೋಲಾದೆ