8ನೇ ತರಗತಿ ಭೂಕೈಲಾಸ ಪೂರಕ ಪಾಠ ನೋಟ್ಸ್ | 8th Standard BhooKailasa Kannada Notes 2022

 

8ನೇ ತರಗತಿ ಭೂಕೈಲಾಸ ಪೂರಕ ಪಾಠ ನೋಟ್ಸ್ | 8th Standard BhooKailasa Kannada Notes 2022

ಅಭ್ಯಾಸ



ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

೧. ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೇಗಿದೆ ?

ಉತ್ತರ: ಚಿಲಿಪಿಲಿಗುಟ್ಟುವ ಪಕ್ಷಿಗಳ ಗುಂಪು, ತಣ್ಣನೆ ತೀಡಿ ಬರುವ ತಂಗಾಳಿ, ಪಶ್ಚಿಮ ಸಮುದ್ರ ತೀರದಲ್ಲಿ ಮುಳುಗುತ್ತಿರುವ ಸೂರ್ಯ ಕಾಣುತ್ತಿತ್ತು. ಈ ರೀತಿ ಆತ್ಮಲಿಂಗವನ್ನು ಪಡೆದು ರಾವಣ ಬಂದು ನಿಂತ ಸ್ಥಳ ಹೀಗಿತ್ತು.

೨. ರಾವಣ ವಟುವನ್ನು ಏಕೆ ಕರೆದನು ?

ಉತ್ತರ: ರಾವಣ ವಟುವನ್ನು ಕರೆದು ನೋಡು ಗಣಪ, ನಾನು ಸಂಧ್ಯಾವಂದನೆ ಮಾಡಬೇಕಾಗಿದೆ ನನ್ನ ಕೈಯಲ್ಲಿರುವ ಈ ಲಿಂಗವನ್ನು ನೆಲದಲ್ಲಿ ಇಡುವಂತಿಲ್ಲ . ಸಂಧ್ಯಾವಂದನೆ ಮುಗಿಯುವವರೆಗೆ ಇದನ್ನು ಹಿಡಿದುಕೊಂಡಿರುವೆಯಾ ಎಂದು ಕರೆದನು.

೩. ವಟುವಿನ ತಂದೆ – ತಾಯಿಯರು ಯಾರು ?

ಉತ್ತರ: ವಟುವಿನ ತಂದೆ ಪರಮೇಶ್ವರ , ತಾಯಿ ಶಾಂಭವಿ.

೪. ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ ಏನು ?

ಉತ್ತರ: ಆತ್ಮಲಿಂಗವನ್ನು ಹಿಡಿದುಕೊಂಡಿರಲು ವಟು ಹಾಕಿದ ನಿಬಂಧನೆ ಏನೆಂದರೆ ನನ್ನ ಕೈಲಾಗದಿದ್ದರೆ ನಿನ್ನ ಕರೆಯುತ್ತೇನೆ, ಮೂರುಬಾರಿ ಕರೆದಾಗಲೂ ಬಾರದಿದ್ದರೆ ಈ ಲಿಂಗವನ್ನು ನೆಲದ ಮೇಲೆ ಇಟ್ಟುಬಿಡುತ್ತೇನೆ ಎಂದು ಹೇಳಿದ.

೫. ರಾವಣನಿಗೆ ಶಿವನಿಂದ ದೊರಕಿದ ಅಭಯ ವಚನವೇನು ?

ಉತ್ತರ: ಮಾತೆ ಕೈಕಸಾದೇವಿಗೆ ಶಿವನ ಆತ್ಮಲಿಂಗವನ್ನು ಧರೆಗಿಳಿಸುತ್ತೇನೆ ಎಂದು ನೀನು ನೀಡಿದ ವಚನವೂ ಕೈಗೂಡಿದಂತಾಯ್ತು.
ಚಿಂತಿಸಬೇಡ.

No comments: